ಮುಂಬೈ (ಪಿಟಿಐ): ಐಪಿಎಲ್ ಕಳ್ಳಾಟ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆ ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮಾಜಿ ನಾಯಕ ರವಿಶಾಸ್ತ್ರಿ ಸೇರಿದಂತೆ ಮೂವರು ಖ್ಯಾತನಾಮರನ್ನು ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡಿದೆ.
ಬಿಸಿಸಿಐ ರಚಿಸಿರುವ ಈ ತನಿಖಾ ಸಮಿತಿಯಲ್ಲಿರುವ ಇನ್ನಿಬ್ಬರೆಂದರೆ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ನಿರ್ದೇಶಕ ಆರ್.ಕೆ.ರಾಘವನ್ ಹಾಗೂ ಕಲ್ಕತ್ತ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎನ್.ಪಟೇಲ್.