ಭುವನೇಶ್ವರ (ಐಎಎನ್ಎಸ್): ಬಹುಕೋಟಿ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಒಡಿಶಾದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಮೊಹಾಂತಿ ಅವರನ್ನು ಸೋಮವಾರ ಬಂಧಿಸಿದೆ.
ನಕಲಿ ಚಿಟ್ಫಂಡ್ ಕಂಪೆನಿ ಅರ್ಥ ಟಟ್ವಾ ಸಮೂಹದೊಂದಿಗೆ ಅವರು ಸಂಬಂಧ ಹೊಂದಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಅವರ ವಕೀಲರು ಹೇಳಿದ್ದಾರೆ.
ಹಲವಾರು ಸುತ್ತಿನ ವಿಚಾರಣೆಯ ನಂತರ ಸಿಬಿಐನ ವಿಶೇಷ ತನಿಖಾ ಘಟಕ ಮೊಹಾಂತಿ ಅವರನ್ನು ಬಂಧಿಸಿದೆ.
ಅಡ್ವೊಕೇಟ್ ಜನರಲ್ ಹುದ್ದೆಗೆ ಹತ್ತು ದಿನಗಳ ಹಿಂದಷ್ಟೇ ಅವರು ರಾಜೀನಾಮೆ ನೀಡಿದ್ದರು. ಆರೋಗ್ಯ ತಪಾಸಣೆಯ ನಂತರ ಮೊಹಾಂತಿ ಅವರನ್ನು ಸಿಬಿಐ ಕಚೇರಿಗೆ ಕರೆತರಲಾಯಿತು.
‘ನಾನು ಶುದ್ಧ ಮನಸ್ಸು ಹೊಂದಿದ್ದೇನೆ. ಯಾವುದೇ ತಪ್ಪು ಕೆಲಸದಲ್ಲಿ ನಾನು ಭಾಗಿಯಾಗಿಲ್ಲ. ಸತ್ಯಕ್ಕೆ ಜಯವಿದೆ’ ಎಂದು ಮೊಹಾಂತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅರ್ಥ ಟಟ್ವಾ ಸಮೂಹ ಮುಖ್ಯಸ್ಥ ಪ್ರದೀಪ್ ಸೇಥಿ ಅವರಿಂದ ಮನೆ ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನು ಮೊಹಂತಿ ತಳ್ಳಿ ಹಾಕಿದರು.