ಬೆಂಗಳೂರು: ಎಚ್ಎಸ್ಆರ್ ಲೇಔಟ್ ಸಮೀಪದ ದೊಡ್ಡಕನ್ನಹಳ್ಳಿಯಲ್ಲಿ ಶನಿವಾರ ಬೆಳಗಿನ ಜಾವ ಮೂರನೇ ಮಹಡಿಯಿಂದ ಬಿದ್ದು ರಾಘವೇಂದ್ರ ಭಟ್ (37) ಎಂಬ ಪೂಜಾರಿ ಮೃತಪಟ್ಟಿದ್ದಾರೆ.
ದೊಡ್ಡಕನ್ನಹಳ್ಳಿ ನಿವಾಸಿಯಾದ ಭಟ್, ಮನೆ ಸಮೀಪದ ರಾಮನ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದರು. ಸೆಕೆ ಎಂಬ ಕಾರಣಕ್ಕೆ ಶುಕ್ರವಾರ ರಾತ್ರಿ ಮಹಡಿಗೆ ಹೋಗಿ ಮಲಗಿದ್ದ ಅವರು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಎಚ್ಚರಗೊಂಡಿದ್ದಾರೆ. ಆದರೆ, ಮಹಡಿಯ ಗೇಟ್ಗೆ ಬೀಗ ಹಾಕಿದ್ದರಿಂದ ಅವರು ಸಜ್ಜಾ ಮೂಲಕ ಪಕ್ಕದ ಕಟ್ಟಡದ ಮಹಡಿಗೆ ಹೋಗಲು ಮುಂದಾಗಿದ್ದಾರೆ.
ಈ ವೇಳೆ ಆಯ ತಪ್ಪಿದ್ದರಿಂದ ಅವರು 3ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಸ್ವಲ್ಪ ಸಮಯದ ನಂತರ ಅವರನ್ನು ನೋಡಿದ ಸ್ಥಳೀಯರೊಬ್ಬರು, ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಾರ್ಗಮಧ್ಯೆಯೇ ಭಟ್ ಪ್ರಾಣ ಬಿಟ್ಟಿದ್ದಾರೆ. ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.