ಪಂಕಿ (ಜಾರ್ಖಂಡ್) (ಪಿಟಿಐ): ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳ ಒಳಗೆ ಕಪ್ಪು ಹಣ ವಾಪಸು ತರಲು ವಿಫಲವಾಗಿರುವುದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತ ಎಂಬುದು ಒಂದು ಕಲೆ ಅದಕ್ಕೆ ಸಹನೆ ಮತ್ತು ಗಂಭೀರತೆ ಬೇಕು ಎಂದು ಶನಿವಾರ ಇಲ್ಲಿ ನಡೆದ ಚುನಾವಣಾ ರ್್ಯಾಲಿಯಲ್ಲಿ ಜೆಪಿಪಿ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.
ಕಪ್ಪು ಹಣವನ್ನು ವಾಪಸ್ ತರುವಲ್ಲಿ ಕಾಂಗ್ರೆಸ್ ನಡೆಸಿದ ಯತ್ನವನ್ನು ಬಿಜೆಪಿ ಅಪಹಾಸ್ಯ ಮಾಡಿತ್ತು. ಆದರೆ ಈಗ ಬಿಜೆಪಿಯೇ ಆ ಕಾರ್ಯದಲ್ಲಿ ವಿಫಲವಾಗಿದೆ ಎಂದು ವ್ಯಂಗ್ಯ ವಾಡಿದರು. ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಪ್ರಸ್ತಾಪಿಸಿದ ಅವರು, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಪ್ರಮುಖವೇ ಹೊರತು ಕೈಯಲ್ಲಿ ಪೊರಕೆ ಹಿಡಿಯುವುದಲ್ಲ ಎಂದರು.