ನವದೆಹಲಿ(ಪಿಟಿಐ): ಅಕ್ರಮ ಹಣ ಮತ್ತು ವಿದೇಶದಲ್ಲಿರುವ ಭಾರತದ ಕಪ್ಪು ಹಣದ ವಿಚಾರಣೆಗೆ ಸಂಬಂಧಪಟ್ಟ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಕೇಂದ್ರ ಸರ್ಕಾರ ಸದ್ಯದಲ್ಲೇ ರಚಿಸಲಿದೆ.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಷಾ ಅವರು ನೂತನ ಎಸ್ಐಟಿಯ ಅಧ್ಯಕ್ಷರಾಗಲಿದ್ದು, ನಿವೃತ್ತ ನ್ಯಾ. ಅರಿಜಿತ್ ಪಸಾಯತ್ ಎಸ್ಐಟಿ ಉಪಾಧ್ಯಕ್ಷರಾಗಿ ಇರುತ್ತಾರೆ.
ದೇಶದ ಹತ್ತು ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಈ ಕಾರ್ಯಾಚರಣೆಯ ತಂಡದ ಸದಸ್ಯರಾಗಿರುತ್ತಾರೆ.
ವಿದೇಶದಲ್ಲಿ ಬಚ್ಚಿಡಲಾಗಿರುವ ಕಪ್ಪು ಹಣ ಮತ್ತು ಅಕ್ರಮ ಹಣಕ್ಕೆ ಸಂಬಂಧಿಸಿದ ಎಲ್ಲಾ ಬಗೆಯ ಮೊಕದ್ದಮೆಗಳು ಎಸ್ಐಟಿಯ ವ್ಯಾಪ್ತಿಗೆ ಬರಲಿವೆ.