ಶಿಕ್ಷಣ ಕ್ಷೇತ್ರ ಉತ್ತಮವಾಗದೆ ದೇಶದ ಪ್ರಗತಿ ಅಸಾಧ್ಯ ಎಂದು ಕಲಾಂ ಪ್ರತಿಪಾದಿಸಿದ್ದರು. ಅದರಲ್ಲೂ ವಿಶೇಷವಾಗಿ ತಮ್ಮ ಅನೇಕ ಭಾಷಣಗಳಲ್ಲಿ ತಾಯ್ನುಡಿಯಲ್ಲಿ ಮಕ್ಕಳಿಗೆ ವೈಜ್ಞಾನಿಕ ವಿಷಯಗಳನ್ನು ಕಲಿಸುವುದರಿಂದ ಆಗುವ ಒಳಿತನ್ನು ಒತ್ತಿ ಹೇಳಿದ್ದರು.
ಕಲಾಂ ತಮ್ಮ ಮಾತೃಭಾಷೆಯಾದ ತಮಿಳು ಮಾಧ್ಯಮದಲ್ಲಿ ಓದಿದವರು. ದೇಶದ ಅತ್ಯುನ್ನತ ಗೌರವ-ಪದವಿಗಳಿಂದ ಪುರಸ್ಕೃತರಾಗಿದ್ದರು. ಅವರ ಈ ಸಾಧನೆ ನಮಗೆಲ್ಲ ಸ್ಫೂರ್ತಿಯಾಗಬೇಕು. ತಾಯ್ನುಡಿಯಲ್ಲಿ ಕಲಿತ ಅವರ ಈ ಮಾದರಿಯನ್ನು ಎಲ್ಲ ತಾಯ್ತಂದೆಯರೂ ತಮ್ಮ ಮಕ್ಕಳ ವಿಚಾರದಲ್ಲಿ ಅನುಸರಿಸುವಂತಾಗಲಿ.