ನವದೆಹಲಿ (ಪಿಟಿಐ): ಕಲ್ಲಿದ್ದಲು ಹಗರಣದ ತನಿಖೆಯಿಂದ ಹಿರಿಯ ಅಧಿಕಾರಿಯೊಬ್ಬರು ಹಿಂದೆ ಸರಿದ ಕಾರಣ ಅವರ ಜಾಗಕ್ಕೆ ಹೆಚ್ಚುವರಿ ನಿರ್ದೇಶಕ, 1981ನೇ ತಂಡದ ಕರ್ನಾಟಕದ ಐಪಿಎಸ್್ ಅಧಿಕಾರಿ ರೂಪಕ್್ ಕುಮಾರ್್ ದತ್ತ ಅವರನ್ನು ನೇಮಿಸಲಾಗಿದೆ.
‘ಜಂಟಿ ನಿರ್ದೇಶಕ, 1985ನೇ ತಂಡದ ಐಪಿಎಸ್್ ಅಧಿಕಾರಿ ಒ.ಪಿ.ಗಲ್ಹೋತ್ರಾ ಇನ್ನು ಮುಂದೆ ಈ ಹಗರಣಕ್ಕೆ ಸಂಬಂಧಿಸಿದ ಯಾವ ಪ್ರಕರಣವನ್ನೂ ನಿರ್ವಹಿಸುವುದಿಲ್ಲ. ಇವರ ಬದಲಿಗೆ ದತ್ತ ಅವರನ್ನು ನೇಮಿಸಲಾಗಿದೆ’ ಎಂದು ಸಿಬಿಐ ನಿರ್ದೇಶಕ ರಂಜಿತ್್ ಸಿನ್ಹಾ ಅವರು ಸುಪ್ರೀಂಕೋರ್ಟ್ನ ಎಲ್ಲ ನ್ಯಾಯಮೂರ್ತಿಗಳಿಗೆ ಪತ್ರ ರವಾನಿಸಿದ್ದಾರೆ.
ಕಲ್ಲಿದ್ದಲು ಹಗರಣದಲ್ಲಿ ಗಲ್ಹೋತ್ರಾ ಸಂಬಂಧಿ ಕೂಡ ಭಾಗಿಯಾಗಿದ್ದಾರೆ ಎಂದು ವಕೀಲ ಪ್ರಶಾಂತ್್ ಭೂಷಣ್್ ಸುಪ್ರೀಂಕೋರ್ಟ್ನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಗಲ್ಹೋತ್ರಾ, ತನಿಖೆಯಿಂದ ಹಿಂದೆ ಸರಿದಿದ್ದಾರೆ.