ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ 20 ಪ್ರಾಥಮಿಕ ತನಿಖೆಗಳ ಪರಿಸಮಾಪ್ತಿ ವರದಿಯನ್ನು ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಸೋಮವಾರ ಹಸ್ತಾಂತರಿಸುವುದಾಗಿ ಸಿಬಿಐ ಹೇಳಿದೆ.
20 ಪ್ರಕರಣಗಳ ದಾಖಲೆಗಳನ್ನು ಇನ್ನೈದು ದಿನಗಳಲ್ಲಿ ಸಿವಿಸಿಗೆ ಸಲ್ಲಿಸುವಂತೆ ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರಿದ್ದ ಸುಪ್ರೀಂಕೋರ್ಟ್್ ಪೀಠ ತಿಳಿಸಿತ್ತು. ಸಿವಿಸಿ ನಾಲ್ಕುವಾರದೊಳಗೆ ತನ್ನ ವರದಿ ಸಲ್ಲಿಸಲಿದೆ ಎಂದೂ ಹೇಳಿತ್ತು.
ಪ್ರಕರಣವನ್ನು ಮುಚ್ಚಬೇಕೇ ಅಥವಾ ಆರೋಪಟ್ಟಿ ಸಲ್ಲಿಸಬೇಕೇ ಎನ್ನುವುದರ ಬಗ್ಗೆ ಸಲಹೆ ನೀಡುವಂತೆ ಮುಖ್ಯ ಜಾಗೃತ ಆಯುಕ್ತರನ್ನು ಕೋರ್ಟ್್ ಕೇಳಿತ್ತು.