ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ ಸರಿಯಾಗಿ ಮಾಡಿ

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಕುಂದುಕೊರತೆ ವಿಭಾಗದಲ್ಲಿ ನಾಗರಭಾವಿ ಸರ್ಕಲ್‌ನ ಮದ್ದೂರಮ್ಮ ದೇವಸ್ಥಾನ ಬಳಿ ಇರುವ ಕಸದ ಸಮಸ್ಯೆ ಬಗ್ಗೆ ಪ್ರಜಾವಾಣಿ ಮೆಟ್ರೊದಲ್ಲಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

ಪತ್ರಿಕೆಯಲ್ಲಿ ಈ ವಿಚಾರ ಬಂದ ಕೂಡಲೇ ಬಿಬಿಎಂಪಿಯ ಐದಾರೂ ವಾಹನಗಳು ಬಂದು ಕಸ ವಿಲೇವಾರಿ ಮಾಡುವ ನಾಟಕ ಮಾಡಿದ್ದಾರೆ ಅಷ್ಟೆ. ರಸ್ತೆ ಮೇಲೆ ಬಿದ್ದು ಕೊಳೆಯುತ್ತಿದ್ದ ಕಸವನ್ನು ಮಾತ್ರ ತೆರವು ಮಾಡಿದ್ದಾರೆ.

ಆದರೆ ಪಕ್ಕದಲ್ಲಿ ಇನ್ನೂ ಕಸದ ಬೆಟ್ಟ ಹಾಗೇ ಉಳಿದಿದೆ. ಮುಖ್ಯರಸ್ತೆಯಲ್ಲೇ ಇಂಥ ಕಸದ ಬೆಟ್ಟದಿಂದ ಇಲ್ಲಿ ಓಡಾಡುವ ಹಿಂಸೆಯಾಗುತ್ತಿದೆ. ಇಲ್ಲಿ ಉತ್ಪತ್ತಿಯಾಗುತ್ತಿರುವ ಸೊಳ್ಳೆ, ನೊಣ, ಕ್ರಿಮಿಗಳಿಂದ ರೋಗ ಹರಡುತ್ತಿದೆ. ದಯಮಾಡಿ ಈ ಕಸದರಾಶಿಯನ್ನು ತೆರವುಗೊಳಿಸಬೇಕೆಂದು ಕೋರುತ್ತೇನೆ
-ಅನಸೂಯ, ನಾಗರಭಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT