2010ರಲ್ಲಿ ಡಿಎಂಕೆ ಸೇರಿದ್ದ ಅವರು ಈ ವರ್ಷದ ಜೂನ್ ತಿಂಗಳಲ್ಲಿ ಆ ಪಕ್ಷ ತೊರೆದಿದ್ದರು. ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗದಿರುವ ಕಾಂಗ್ರೆಸ್ ಪಕ್ಷಕ್ಕೆ ಖುಷ್ಬೂ ಸೇರ್ಪಡೆಯಿಂದ ಬಲ ಬಂದಂತಾಗಿದೆ.
‘ಕಾಂಗ್ರೆಸ್ನಲ್ಲಿರುವುದು ದೊಡ್ಡ ಗೌರವ. ಈ ಪಕ್ಷ ಸೇರಿದ ಬಳಿಕ ನನಗೆ ತವರಿಗೆ ಮರಳಿದಂತೆ ಆಗಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.