ಪ್ರಿಯಾಂಕಾ ವಾಧ್ರಾ ಅವರ ಆರೋಪಗಳ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ‘ನನ್ನನ್ನು ಪ್ರಧಾನಿ ರೇಸ್ನಿಂದ ಹೊರಗಿಡಲು ತೃತೀಯ ರಂಗವನ್ನು ಬೆಂಬಲಿಸುವುದಾಗಿ ಹೇಳುವ ಮೂಲಕ ಕಾಂಗ್ರೆಸ್ ಈಗಾಗಲೇ ಸೋಲು ಒಪ್ಪಿಕೊಂಡಿದೆ. ಪ್ರಧಾನಿ, ಹಣಕಾಸು ಸಚಿವ ಹಾಗೂ ಇತರ ಹಿರಿಯ ಸಚಿವರು ಕಣದಲ್ಲಿ ಇಲ್ಲ. ಕಾಂಗ್ರೆಸ್ನ ಹಿರಿಯ ಮುಖಂಡರು ಚುನಾವಣೆಯಿಂದ ದೂರ ಓಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.