ದನ ಕಾಯುವುದು ಎಂದರೆ ತೀರಾ ನಿಷ್ಪ್ರಯೋಜಕ ಕೆಲಸ ಎಂಬ ಅರ್ಥದಲ್ಲಿ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ಟೀಕಾಸ್ತ್ರ ಬಳಸಿದ್ದಾರೆ. ಹಿರಿಯ ರಾಜಕಾರಣಿಗಳಿಗೆ ಇದು ತರವಲ್ಲ. ಇದರಿಂದ ನಾಯಕರ ಘನತೆಗೇ ಕುಂದು.
ಸ್ವಾಮಿ, ದನ ಕಾಯುವುದು ಅಷ್ಟೊಂದು ಹಗುರವಾದ ಕೆಲಸವಲ್ಲ. ಅಲ್ಲೂ ವೃತ್ತಿನಿಷ್ಠೆ ಇದೆ, ಪ್ರಾಮಾಣಿಕತೆ ಇದೆ, ಪ್ರಾಣಿಪ್ರೇಮವೂ ಇದೆ. ಉಪಜೀವನಕ್ಕಾಗಿ ನಾವು ಮಾಡುವ ಕಾಯಕದಲ್ಲಿ ತರತಮ ಎಂಬುದಿಲ್ಲ. ಸತ್ಯಶುದ್ಧವಾದ ಈ ಪ್ರಾಮಾಣಿಕ ಕಾಯಕಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ.