ಅಂದರೆ, ಈಗ ೧೦ಕ್ಕಿಂತ ಹೆಚ್ಚು ಹಾಗೂ ೪೦ ಸಂಖ್ಯೆಯ ಮಿತಿಯೊಳಗೆ ಸಿಬ್ಬಂದಿ ಹೊಂದಿರುವ ಸಂಸ್ಥೆಗಳು ದಾಖಲಾತಿ ಪುಸ್ತಕ ನಿರ್ವಹಿಸುವುದು ಹಾಗೂ ವರಮಾನ ಲೆಕ್ಕಪತ್ರ ವಿವರ ಸಲ್ಲಿಸಬೇಕಾಗಿಲ್ಲ. ಈ ಮುಂಚೆ, ೧೦ಕ್ಕಿಂತ ಹೆಚ್ಚು ಹಾಗೂ ೧೯ಕ್ಕಿಂತ ಕಡಿಮೆ ಸಿಬ್ಬಂದಿ ಇರುವ ಸಂಸ್ಥೆಗಳಿಗೆ ಈ ವಿನಾಯಿತಿ ಇತ್ತು.
ದಾಖಲಾತಿ ವಿವರವನ್ನು ಕಂಪ್ಯೂಟರ್, ಫ್ಲಾಪಿ, ಡಿಸ್ಕೆಟ್ ಅಥವಾ ಬೇರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣದಲ್ಲಿ ನಿರ್ವಹಿಸಲು ತಿದ್ದುಪಡಿಯಾಗಿರುವ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ೪೦ ಸಿಬ್ಬಂದಿಗಳಿರುವ ಕಂಪೆನಿಗಳ ಮಾಲೀಕರಿಗೆ ವರಮಾನ ಲೆಕ್ಕಪತ್ರ ವಿವರ ಸಲ್ಲಿಸಲು ಸೂಚಿಸಿದಾಗ ಅದನ್ನು ಕಾರ್ಮಿಕ ಇನ್ಸ್ಪೆಕ್ಟರ್ ಅವರಿಗೆ ಅಂತರ್ಜಾಲದ ಮೂಲಕವೇ ಸಲ್ಲಿಸಬಹುದು. ಒಂದೊಮ್ಮೆ ಇದನ್ನು ಕಂಪೆನಿ ಕಳುಹಿಸದಿದ್ದರೂ ಅದಕ್ಕಾಡಿ ದಂಡ ವಿಧಿಸುವ ಅಧಿಕಾರ ಇರುವುದಿಲ್ಲ.
ಸಿಪಿಎಂ, ಸಿಪಿಐ ವಿರೋಧ
ದೇಶದಲ್ಲಿರುವ ಶೇ ೭೦ಕ್ಕೂ ಹೆಚ್ಚು ಕಂಪೆನಿಗಳಿಗೆ ಇದರಿಂದ ಅನುಕೂಲವಾಗಿ ಶೇ ೮೦ರಷ್ಟು ಕಾರ್ಮಿಕರು ಈಗಿರುವ ಭದ್ರತೆಯನ್ನು ಕಳೆದುಕೊಳ್ಳಲಿದ್ದಾರೆ ಎಂಬುದು ಸಿಪಿಎಂ, ಸಿಪಿಐ ಮತ್ತಿತರ ಪಕ್ಷಗಳ ಆಕ್ಷೇಪವಾಗಿದೆ. ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರು ಈ ಪ್ರಸ್ತಾವವನ್ನು ಮತಕ್ಕೆ ಹಾಕಬೇಕು ಎಂದು ಒತ್ತಾಯಿಸಿದರು. ಆದರೆ ಕಾಂಗ್ರೆಸ್ ಪಕ್ಷವು ತಿದ್ದುಪಡಿಯನ್ನು ಬೆಂಬಲಿಸಿದ್ದರಿಂದ ಅವುಗಳ ವಿರೋಧಕ್ಕೆ ಬಲ ಬರಲಿಲ್ಲ. ಸಿಪಿಎಂ, ಜೆಡಿಯು ಮತ್ತು ಎಸ್ಪಿ ಸದಸ್ಯರು ಇದನ್ನು ವಿರೋಧಿಸಿ ಸದನದಿಂದ ಹೊರನಡೆದರು.