ನವದೆಹಲಿ (ಪಿಟಿಐ): ಕನ್ನಡದ ಕವಯತ್ರಿ ಕಾವ್ಯಾ ಕಡಮೆ ಅವರು 2014ನೇ ಸಾಲಿನ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಯುವ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಒಟ್ಟು 21 ಭಾಷೆಗಳ ಯುವಕವಿಗಳಿಗೆ ಸಾಹಿತ್ಯ ಅಕಾಡೆಮಿ ಶುಕ್ರವಾರ ಪಟ್ಟಿಯನ್ನು ಪ್ರಕಟಿಸಿದೆ. 13 ಕಾವ್ಯಾ, ಮೂರು ಕಾದಂಬರಿ, ನಾಲ್ಕು ಕಿರುಕಥೆ ಮತ್ತು ಒಂದು ಪ್ರಬಂಧ ಕೃತಿಗಳು ಯುವ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಪುರಸ್ಕಾರವು ಫಲಕ ಮತ್ತು
ರೂ 50 ಸಾವಿರ ಮೊತ ಒಳಗೊಂಡಿರಲಿದೆ.
ಆನಂದ್ಗೆ ಬಾಲಪುರಸ್ಕಾರ: ಮಕ್ಕಳ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಕನ್ನಡದ ಆನಂದ್ ವಿ. ಪಾಟೀಲ್ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.