ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 145 ರನ್ಗಳ ಗುರಿ ಬೆನ್ನೆಟ್ಟಿದ ವೆಸ್ಟ್ ಇಂಡೀಸ್, 49.3 ಓವರ್ಗಳಲ್ಲಿ ಗುರಿ ತಲುಪುವ ಮೂಲಕ 5 ವಿಕೆಟ್ಗಳ ವಿಜಯ ದಾಖಲಿಸಿ ವಿಶ್ವಕಪ್ ಎತ್ತಿ ಹಿಡಿಯಿತು.
ಚಾಂಪಿಯನ್ ಪಟ್ಟ ಅಲಂಕರಿಸುವ ಭಾರತದ ಕನಸಿಗೆ ವೆಸ್ಟ್ಇಂಡೀಸ್ನ ಕೆ.ಯು ಕಾರ್ಟಿ (52) ಮತ್ತು ಕೆ.ಎಂ.ಎ ಪಾಲ್ ಅಜೇಯ (40) ತಣ್ಣೀರೆರೆಚಿದರು. ಕೊನೆಯ ಓವರ್ನಲ್ಲಿ ವೆಸ್ಟ್ ಇಂಡೀಸ್ ಗೆಲುವಿಗೆ ಮೂರು ರನ್ ಬೇಕಿತ್ತು. ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಕೆರೆಬಿಯನ್ ಪಡೆ ಈ ಗುರಿ ತಲುಪಿತು.
ಭಾರತ ತಂಡದ ಪರವಾಗಿ ಸರ್ಫರಾಜ್ ಖಾನ್ (51), ಆರ್.ಆರ್ ಬಾಥಮ್ (21), ಎಂ.ಕೆ. ಲ್ಯಾಮ್ರರ್ (19) ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. ಉತ್ತಮ ಲಯದಲ್ಲಿದ್ದ ನಾಯಕ ಕಿಶನ್ (4) ಮತ್ತು ರಿಷಭ್ ಪಂತ್ (1) ಬೇಗನೆ ಔಟಾಗಿದ್ದು ಭಾರತಕ್ಕೆ ಮುಳುವಾಯಿತು.