‘ಕಿವುಡ ಮಕ್ಕಳ ಮೇಲೆ ಶಾಸಕಿ ಕಾಳಜಿ’ (ಪ್ರ.ವಾ., ಮಾ. 28). ಪ್ರಶಂಸನೀಯ. ಆದರೆ ಮೂಲಭೂತ ಸಮಸ್ಯೆಯೇನೆಂದರೆ, ಯಾರು ಏನೇ ಹೇಳಿದರೂ, ಎಷ್ಟೇ ಹೇಳಿದರೂ, ಬೊಬ್ಬೆ ಹಾಕಿದರೂ ಸರ್ಕಾರಕ್ಕೆ ಕೇಳಿಸುವುದಿಲ್ಲ: ಸ್ವತಃ ಅದಕ್ಕೇ (ಜಾಣ) ಕಿವುಡು! (ಕೆಲವೊಮ್ಮೆ ಜಾಣಗುರುಡು ಕೂಡ).
ಹೀಗಾಗಿ, ಯಾವುದೇ ವಿಷಯದಲ್ಲಿ ಪರಿಸ್ಥಿತಿ ಕಿಂಚಿತ್ತೂ ಸುಧಾರಿಸದಿದ್ದರೆ ಆಶ್ಚರ್ಯವೇನು?
ಸಿ.ಪಿ.ಕೆ., ಮೈಸೂರು