ಬೆಂಗಳೂರು: ವಜ್ರ ಮತ್ತು ಚಿನ್ನಾಭರಣಗಳ ಸಂಸ್ಥೆ ಕೀರ್ತಿಲಾಲ್ಸ್, ನಗರದ ರಿಚ್ಮಂಡ್ ವೃತ್ತದ ಬಳಿ ಇರುವ ಮಳಿಗೆಯನ್ನು ಡೈಮಂಡ್ ಬೂಟಿಕ್ ಆಗಿ ಪರಿವರ್ತಿಸಿದೆ. ಆಭರಣ ಪ್ರಿಯರಿಗೆ ಇಷ್ಟವಾಗುವ ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸದ ವಜ್ರಾಭರಣ ಇಲ್ಲಿ ಲಭ್ಯವಿರಲಿವೆ ಎಂದು ಕೀರ್ತಿಲಾಲ್ಸ್ನ ವ್ಯಾವಹಾರಿಕ ಕಾರ್ಯನೀತಿ ವಿಭಾಗದ ನಿರ್ದೇಶಕ ಸೂರಜ್ ಶಾಂತಕುಮಾರ್ ಮಾಹಿತಿ ನೀಡಿದರು.
ಆಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಇ–ಕಾಮರ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಆನ್ಲೈನ್ ಮಳಿಗೆ ತೆರೆಯುವ ಯೋಜನೆ ಇದೆ ಎಂದರು.