ಅಂದಹಾಗೆ ತನಿಖೆ ಸೂಕ್ಷ್ಮತೆಯನ್ನು ಪಡೆದುಕೊಂಡರೆ ಕೃತಿಚೌರ್ಯದ ಇನ್ನಷ್ಟು ಪ್ರಕರಣಗಳು ಹೊರಬರಲಿವೆ; ಅದು ಆಗಬೇಕು ಕೂಡ. ಏಕೆಂದರೆ ಕೃತಿಚೌರ್ಯ ಅಂದರೆ ಏನು, ಅದು ಏಕೆ ನಿಷಿದ್ಧ ಎಂಬ ಶಿಕ್ಷಣವನ್ನು ನೀಡಬೇಕಿರುವ ವಿ.ವಿಗಳೇ ಕೃತಿಚೌರ್ಯದ ತವರು ಮನೆಯಾದರೆ ಹೇಗೆ? ಎಲ್ಲೆಡೆ ಭ್ರಷ್ಟಾಚಾರ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಸರಸ್ವತಿ ಮಂದಿರವಾದರೂ ಪವಿತ್ರವಾಗಿ ಇರಬೇಡವೇ?