ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಗೇರಿಯಲ್ಲಿ ನಾಳೆ ಸಾಹಿತ್ಯ ಸಮ್ಮೇಳನ

Last Updated 29 ಜುಲೈ 2014, 20:31 IST
ಅಕ್ಷರ ಗಾತ್ರ

ಕೆಂಗೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಸಾಹಿತ್ಯ ಸಮ್ಮೇಳನವು ಜು.31 ರಂದು ಕೆಂಗೇರಿಯಲ್ಲಿ ನಡೆ­ಯಲಿದೆ. ಸಮ್ಮೇ­­ಳ­ನಾಧ್ಯಕ್ಷರನ್ನಾಗಿ ಡಾ. ಕೂಡ್ಲೂರು ವೆಂಕ­ಟಪ್ಪನವರನ್ನು ಆಯ್ಕೆ ಮಾಡಲಾಗಿದೆ.

ಡಾ. ಕೂಡ್ಲೂರು ವೆಂಕಟಪ್ಪನ­ವರು ಚನ್ನಪಟ್ಟಣ ತಾಲ್ಲೂಕು ಕೂಡ್ಲೂರು ಗ್ರಾಮದವರು. ವಿಮರ್ಶ­ಕರು, ವಿಚಾರ­ವಂತ ಲೇಖಕರು, ಜನಪದ ಸಾಹಿತ್ಯದಲ್ಲಿ ಹೆಚ್ಚು ಅಧ್ಯಯನ ಮತ್ತು ನೂರಾರು ಲೇಖನಗಳನ್ನು, ಪುಸ್ತಕಗಳನ್ನು ಬರೆದು ಈ ಕ್ಷೇತ್ರದಲ್ಲಿ ಗಮನಸೆಳೆದವರು.

ಸುಮಾರು 50ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ಕುರಿತು ವಿಮರ್ಶೆ ಮಾಡಿರು­ವರು. ಕೆಂಗೇರಿ ಉಪನಗರದ ಗುರು­ರಾಜ ಸಭಾ ಭವನದ ಎದುರು, ಬಾಲ­ಗಂಗಾಧರನಾಥ ಸ್ವಾಮೀಜಿ ಮಂಟಪ­ದಲ್ಲಿ ಸಮ್ಮೇಳನ ನಡೆಯಲಿದೆ. ಸಚಿವ ರಾಮಲಿಂಗಾರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT