ಟೊರೆಂಟೊ (ಪಿಟಿಐ): ಇಲ್ಲಿನ ಎಲಿಜಬೆತ್ ಸ್ಪೀಡ್ವೇನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಭಾರತ ಮೂಲದ ಮನ್ಮೀತ್ ಭುಲ್ಲರ್ (53) ಮೃತಪಟ್ಟಿದ್ದಾರೆ.
ಭುಲ್ಲರ್ ಅವರು ಕೆನಡಾದ ಆಲ್ಬರ್ಟ ರಾಜ್ಯದ ಕಲ್ಗರಿ ಗ್ರೀನ್ವೇ ಕ್ಷೇತ್ರದ ಶಾಸಕರಾಗಿದ್ದರು. ಎಲಿಜಬೆತ್ ಸ್ಪೀಡ್ವೇಯಲ್ಲಿ ಮನ್ಮೀತ್ ಕಾರು ಚಲಾಯಿಸುತ್ತಿದ್ದರು. ಅವರ ಕಾರಿನ ಮುಂದೆ ಚಲಿಸುತ್ತಿದ್ದ ಬೈಕ್ ಸವಾರ ರಸ್ತೆಯಲ್ಲಿ ತುಂಬಿದ್ದ ಹಿಮದ ಮೇಲೆ ಜಾರಿ ಬಿದ್ದಿದ್ದಾರೆ.