ಅಭಿವೃದ್ಧಿ, ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ’ ಎಂದರು.
‘ಈವರೆಗೆ ಒತ್ತುವರಿಗೆ ಒಳಗಾದ ಅನೇಕ ಕೆರೆಗಳಿಗೆ ಬೇಲಿಯೇ ಇಲ್ಲ. ಬೇಲಿ ನಿರ್ಮಿಸಿದರೆ ಒತ್ತುವರಿಗೆ ತಡೆಹಾಕಬಹುದು. ಈ ವರೆಗೆ ತಡೆಬೇಲಿಯಿಂದ 38 ಕೆರೆಗಳು ಸಂರಕ್ಷಣೆಯಾಗಿವೆ. ಇನ್ನುಳಿದ 79 ಕೆರೆಗಳಿಗೆ ಯಾವುದೇ ರಕ್ಷಣೆ ಇಲ್ಲದಾಗಿದೆ’ ಎಂದು ನಾಯಕ್ ಹೇಳಿದರು.
‘ಕೆರೆಗಳ ಗಡಿ ಗುರುತಿಸಿದ ನಂತರವಷ್ಟೇ ಬೇಲಿ ನಿರ್ಮಿಸುವ ಕೆಲಸ ಆರಂಭಗೊಳ್ಳುತ್ತದೆ. ವರ್ತೂರು, ಅಗರ ಮತ್ತಿತರ ಕೆರೆಗಳನ್ನು ಸಂಪರ್ಕಿಸುವ ಬೆಳ್ಳಂದೂರು ಕೆರೆ 11 ಕಿ.ಮೀ ಸುತ್ತಳತೆ ಹೊಂದಿದೆ. ಇದಕ್ಕೆ ತಡೆಬೇಲಿ ನಿಲ್ಲಿಸಬೇಕಾದರೆ ಸುಮಾರು 3 ತಿಂಗಳು ಬೇಕಾಗುತ್ತದೆ. ಈ ಕೆರೆಗೆ ಬೇಲಿ ನಿರ್ಮಿಸಲು ಸುಮಾರು ₨ 3 ಕೋಟಿ ವೆಚ್ಚವಾಗಲಿದೆ’ ಬಿಡಿಎ ಮೂಲಗಳು ತಿಳಿಸುತ್ತದೆ.
ಪ್ರತಿ ಮೀಟರ್ ಬೇಲಿ ನಿರ್ಮಾಣಕ್ಕೆ ₨800–1000 ವೆಚ್ಚ ತಗಲುತ್ತದೆ. ಹೀಗಾಗಿ, ಪ್ರತಿ ಕೆರೆಗೆ ತಡೆಬೇಲಿ ನಿರ್ಮಿಸಲು ಸುಮಾರು ₨1–5 ಕೋಟಿ ಖರ್ಚಾಗುತ್ತದೆ. ನಗರದ 79 ಕೆರೆಗಳಿಗೂ ತಡೆಬೇಲಿ ನಿರ್ಮಿಸಬೇಕಾದರೆ ಸುಮಾರು ₨100 ಕೋಟಿ ಬೇಕಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದರು.
ಕೆರೆಗಳ ನಿರ್ವಹಣೆಯು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದು. ಅದು ಯಾಕೆ ಈ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸುವ ಅಧಿಕಾರಿಗಳು, ಅರಣ್ಯ ಭೂಮಿ ಸಂರಕ್ಷಣೆ ಸೇರಿದಂತೆ ಹತ್ತಾರು ಕೆಲಸಗಳು ನಾವೇ ನಿರ್ವಹಿಸಬೇಕೆಂದರೆ ತುಂಬಾ ಕಷ್ಟವಾಗುತ್ತದೆ ಎಂದು ಹೇಳಿದರು.