ನವದೆಹಲಿ (ಪಿಟಿಐ): ಜಾಟರನ್ನು ಒಬಿಸಿ ವರ್ಗಕ್ಕೆ ಸೇರಿಸುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಎರಡು ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
‘ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯಕ್ಕೆ ಈ ಸಂಬಂಧ ಸಂಪೂರ್ಣ ದಾಖಲೆ ಮತ್ತು ಕಡತಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಮುಖ್ಯನ್ಯಾಯಮೂರ್ತಿ ಪಿ.ಸದಾಶಿವಂ ಹಾಗೂ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಮತ್ತು ಎನ್.ವಿ.ರಮಣ ಅವರಿದ್ದ ಪೀಠ ಹೇಳಿದೆ.
‘ಅಧಿಸೂಚನೆಗೆ ತಡೆ ನೀಡಬೇಕೆಂದು ಈ ಮನವಿಗಳಲ್ಲಿ ಕೋರಲಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು, ನಾವು ಅಟಾರ್ನಿ ಜನರಲ್ ಜಿ.ವಿ.ವಾಹನ್ವತಿ ನೆರವು ಕೋರುತ್ತೇವೆ’ ಎಂದೂ ಪೀಠ ಹೇಳಿದೆ.