ನವದೆಹಲಿ: ಜೈಲು ಶಿಕ್ಷೆಗೊಳಗಾಗಿದ್ದ ಶತ್ರುಗುಂಪಿನ ಸದಸ್ಯನೊಬ್ಬನನ್ನು ನ್ಯಾಯಾಲಯದ ಆವರಣದಲ್ಲಿಯೇ ಕೊಲೆ ಮಾಡಲು ಯತ್ನಿಸಿದ್ದ ಕುಖ್ಯಾತ ಗುಂಪಿನ ಯತ್ನವನ್ನು ತಡೆದಿರುವ ಪೊಲೀಸರು ಈ ಸಂಬಂಧ 10 ಜನರನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಹತನಾಗಿದ್ದ ಕುಖ್ಯಾತ ಪಾತಕಿ ನೀತು ದಾಬೋ ಡಿಯಾ ಸಹಚರ ಪ್ರದೀಪ್ ಎಂಬಾತ ನನ್ನು ಈ ಗ್ಯಾಂಗ್ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿತ್ತು.
ಬುಧವಾರ ಬೆಳಿಗ್ಗೆ ವಿಚಾರಣೆಗಾಗಿ ರೋಹಿಣಿ ಜಿಲ್ಲಾ ನ್ಯಾಯಾಲಯಕ್ಕೆ ಪ್ರದೀಪ್ನನ್ನು ಪೊಲೀಸರು ಕರೆತಂದಿದ್ದರು. ಈ ವೇಳೆ ಪ್ರದೀಪ್ನನ್ನು ಹತ್ಯೆ ಮಾಡಲು ನವೀನ್ ಮತ್ತು ನೀರಜ್ ಗುಂಪುಗಳು ನಡೆಸಿದ ಯತ್ನವನ್ನು ಪೊಲೀಸರು ತಡೆದಿದ್ದಾರೆ.