ನವದೆಹಲಿ (ಪಿಟಿಐ): ನಿಥಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಸುರಿಂದರ್ ಕೋಲಿಗೆ ಗಲ್ಲು ಶಿಕ್ಷೆ ಜಾರಿ ಮಾಡುವುದಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಅ.29ರವರೆಗೆ ವಿಸ್ತರಿಸಿದೆ.
ಕೋಲಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಅವರು ವಜಾ ಮಾಡಿದ್ದರಿಂದ ಆತನನ್ನು ಇದೇ 8ರಂದು (ಸೋಮವಾರ) ನೇಣಿಗೆ ಹಾಕಲು ಮೀರಠ್ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಕೊನೆಯ ಕ್ಷಣದಲ್ಲಿ (ಸೋಮವಾರ ನಸುಕಿನ 1.40ಕ್ಕೆ) ಗಲ್ಲು ಶಿಕ್ಷೆ ಜಾರಿಗೆ ಸೆ.12ರವರೆಗೆ ತಡೆಯಾಜ್ಞೆ ನೀಡಿತ್ತು.