ಕಟ್ಟಡದೊಳಗೆ ಸಿಲುಕಿದ್ದ 20 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನೂ ನಾಲ್ವರು ಕಟ್ಟಡದೊಳಗೆ ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ದಟ್ಟ ಹೊಗೆ ವ್ಯಾಪಿಸಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತುಸು ಹಿನ್ನಡೆ ಆಗಿದೆ ಎಂದು ಪಶ್ಚಿಮ ಬಂಗಾಳದ ಸಚಿವ ಜಾವೇದ್ ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಟ್ಟಡದ 12 ಮತ್ತು 15ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಇತರೆಡೆಗೂ ವ್ಯಾಪಿಸಿತು. ಅಗ್ನಿ ಶಾಮಕ ದಳದ 20 ವಾಹನಗಳು ಕಟ್ಟಡ ಸುತ್ತುವರೆದು ಅಗ್ನಿ ನಂದಿಸಿದವು.