ಶ್ರೀನಗರ, ಜಮ್ಮು ಮತ್ತು ಕಾಶ್ಮೀರ(ಐಎಎನ್ಎಸ್): ಗಡಿ ನಿಯಂತ್ರಣ ರೇಖೆಯ(ಎಲ್ಒಸಿ) ಭಾರತದ ಪಾರ್ಶ್ವದಲ್ಲಿ ನುಸುಳಲು ಯತ್ನಿಸುತ್ತಿದ್ದ ಐವರು ಗೇರಿಲ್ಲಾಗಳನ್ನು ಭದ್ರತಾ ಪಡೆಗಳು ಕೊಂದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಭಾರತದ ಯೋಧರೊಬ್ಬರು ವೀರ ಮರಣವನ್ನಪ್ಪಿದ್ದಾರೆ.