ಪಾಕ್ ದಾಳಿಗೆ ಭಾರತದ ಗಡಿ ಭದ್ರತಾ ಪಡೆಯ ಯೋಧರು ತಕ್ಕ ಉತ್ತರವನ್ನು ನೀಡಿದ್ದಾರೆ. ಜಮ್ಮು ಜಿಲ್ಲೆಯ ಅರ್ನಿಯ, ಆರ್.ಎಸ್.ಪುರ ಸೆಕ್ಟರ್ಗಳಲ್ಲಿರುವ ನಾಗರಿಕರ ಮೇಲೆ ಪಾಕಿಸ್ತಾನಿ ಸೈನಿಕರು ಗುಂಡಿನ ದಾಳಿ, ಷೆಲ್ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಈ ಗಡಿ ಪ್ರದೇಶಗಳಿಂದ ಜನರನ್ನು ಇದುವರೆಗೂ ಸ್ಥಳಾಂತರ ಮಾಡಿಲ್ಲ ಜನರ ಮೇಲೆ ನಾವು ತೀವ್ರವಾದ ನಿಗಾವನ್ನು ಇಟ್ಟಿದ್ದೇವೆ. ಗ್ರಾಮದ ಜನರನ್ನು ಸ್ಥಳಾಂತರ ಮಾಡಬೇಕಾಗಿ ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.