ನವದೆಹಲಿ: ಕಬ್ಬಿಣದ ಅದಿರು ಹೇರಳವಾಗಿರುವ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಬಳ್ಳಾರಿ–ಹೊಸಪೇಟೆ ಪ್ರದೇಶಗಳಲ್ಲಿ ಅಂತರರಾಜ್ಯ ಗಡಿ ಗುರುತು ಕಾರ್ಯ ಪೂರ್ಣಗೊಳಿಸಲು ಮಹಾ ಸರ್ವೇಕ್ಷಣಾಧಿಕಾರಿ (ಎಸ್ಜಿಐ), ಸುಪ್ರೀಂಕೋರ್ಟ್ನಿಂದ ಮತ್ತೊಂದು ತಿಂಗಳು ಕಾಲಾ ವಕಾಶ ಕೇಳಿದ್ದಾರೆ.
ಏ.13ರಿಂದ 17ರವರೆಗೆ ಕ್ಷೇತ್ರ ಪರಿಶೀಲನೆ ನಡೆಯಬೇಕಿತ್ತು. ಆದರೆ ಕರ್ನಾಟಕದಲ್ಲಿ ಅಧಿಕಾರಿಗಳು ಚುನಾ ವಣಾ ಕಾರ್ಯದಲ್ಲಿ ನಿರತರಾಗಿದ್ದುದ ರಿಂದ ಕ್ಷೇತ್ರ ಪರಿಶೀಲನೆ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಎಸ್ಜಿಐ ಸ್ವರ್ಣ ಸುಬ್ಬರಾವ್ ಕೋರ್ಟ್ಗೆ ತಿಳಿಸಿದರು.
‘ನಮ್ಮ ತಾಂತ್ರಿಕ ತಂಡಕ್ಕೆ ಅಗತ್ಯ ರಕ್ಷಣೆ ನೀಡ ಬೇಕೆಂದು ಈಗಾ ಗಲೇ ಬಳ್ಳಾರಿ ಹಾಗೂ ಅನಂತಪುರ ಡಿ.ಸಿಗೆ ಪತ್ರ ಬರೆಯಲಾಗಿದೆ’ ಎಂದು ಎಸ್ಜಿಐ ಹೇಳಿದರು.