ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣ್ಯರು, ತಾರೆಗಳ ದಂಡು

Last Updated 29 ಮೇ 2016, 20:07 IST
ಅಕ್ಷರ ಗಾತ್ರ

ಬೆಂಗಳೂರು: ಫೈನಲ್ ಹಣಾಹಣಿಯನ್ನು ಚಿತ್ರರಂಗ, ರಾಜಕೀಯ ಕ್ಷೇತ್ರದ ಪ್ರಮು ಖರು ಭಾನುವಾರ ಕ್ರೀಡಾಂಗಣದಲ್ಲಿ ಸೇರಿದ್ದರು.  ತೆಲುಗು ಚಿತ್ರನಟ ವೆಂಕಟೇಶ್ ಅವರು ಸನ್‌ರೈಸರ್ಸ್ ತಂಡ ವನ್ನುಹುರಿದುಂಬಿಸಲು ಬಂದಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತಿತರರು ಪಂದ್ಯ ವೀಕ್ಷಿಸಿದರು. ಬಿಸಿಸಿಐ ನೂತನ ಅಧ್ಯಕ್ಷ ಅನುರಾಗ್ ಠಾಕೂರ್ ಕೂಡ  ಇದ್ದರು.

‌‌ಗೇಲ್  ತುಂಟಾಟ..
ಕ್ರಿಸ್ ಗೇಲ್ ಬ್ಯಾಟ್‌ ಬೀಸಲು ಆರಂಭಿಸಿದರೆ ಸಿಕ್ಸರ್, ಬೌಂಡರಿಗಳ ಸುರಿಮಳೆ ಸಹಜ. ಬೌಲಿಂಗ್ ಮಾಡಲು ಆರಂಭಿಸಿದರೆ ಸಖರ್ ಮನರಂಜನೆ ನೀಡುವ ಕಲಾವಿದನೂ ಹೌದು.

ಫೈನಲ್ ಪಂದ್ಯದ ಎರಡನೇ ಓವರ್ ಬೌಲಿಂಗ್ ಮಾಡುವಾಗ ಅವರು ಒಂದೆ ರಡು ಬಾರಿ ಮಾಡಿದ ತುಂಟತನಗಳು ಪ್ರೇಕ್ಷಕರು, ಸಹ ಆಟಗಾರರು ಮತ್ತು ಎದುರಾಳಿ ಬ್ಯಾಟ್ಸ್‌ಮನ್‌ಗಳೂ ನಕ್ಕರು.

ಆ ಓವರ್‌ನ ಮೊದಲ ಎಸೆತವನ್ನು ಶಿಖರ್ ಧವನ್ ಹೊಡೆದಾಗ ಚೆಂಡು ಇನ್ನೊಂದು ತುದಿಯಲ್ಲಿದ್ದ ವಾರ್ನರ್ ಅವರತ್ತ ಸಾಗಿತು. ಅದನ್ನು ಹಿಡಿಯಲು ಹೋದ ಗೇಲ್ ಅವರು ಚೆಂಡು ಹಿಡಿಯುವ ನೆಪದಲ್ಲಿ ವಾರ್ನರ್‌ ಅವರ ಅತ್ತ ಇತ್ತ ಸುಳಿದಾಡಿ, ಒಂದಷ್ಟು ಕಿಚಾ ಯಿಸಿ ತುಂಟನಗೆ ಬೀರಿದರು.

ಬೌಂಡರಿ ಲೈನ್‌ನಲ್ಲಿದ್ದ ಎ.ಬಿ. ಡಿವಿಲಿಯರ್ಸ್ ಕೂಡ ನಗೆಯರಳಿಸಿದರು. ಅದೇ ಓವರ್‌ನ ಐದನೇ ಎಸೆತದಲ್ಲಿ ಧವನ್ ಸ್ಟ್ರೇಟ್ ಡ್ರೈವ್ ಮಾಡಿದರು. ಡೈವ್ ಮಾಡಿದ ಗೇಲ್ ಪ್ರಯತ್ನಕ್ಕೆ ಕ್ಯಾಚ್ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT