“ಸ್ವಾಮೀಜಿ ‘ಗಾಂಧಿಗಿರಿ’: ತಪ್ಪಿದ ಘರ್ಷಣೆ” (ಪ್ರ.ವಾ., ಸೆ. 8). 66 ವರ್ಷಗಳ ಹಿಂದೆ ಮೃತ ಹೊಂದಿದ ಗಾಂಧಿ ಆಗಾಗ ಬದುಕುವುದುಂಟು; ಇದು ಅಂಥ ಒಂದು ಅಪರೂಪದ ಬೋಧಪ್ರದ ಪ್ರಸಂಗ; ಹತಾಶೆ ಸಲ್ಲದು, ಇನ್ನೂ ಆಶಾವಾದಕ್ಕೆ ಅವಕಾಶವಿದೆ ಎಂದು ಸಾರುವ ಸಂದರ್ಭ!
ನಮ್ಮ ಮಠಾಧೀಶರು ಮತ್ತು ಸ್ವಾಮೀಜಿಗಳು, ಆ ಬಸವದೇವ ಸ್ವಾಮೀಜಿಯಂತೆ, ಅಗತ್ಯ ಬಿದ್ದಾಗ ರಸ್ತೆಯಲ್ಲಿ (ಲ್ಲೂ) ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಬಾರದೆ? ಆಗ ಅವರು ಸನ್ಮಾರ್ಗದರ್ಶಿಗಳಾಗಬಹುದು!
‘ಸಬ್ ಕೋ ಸನ್ಮತಿ ದೇ ಭಗವಾನ್’