ರಂಗ ಚಟುವಟಿಕೆಗಳು ರಾಜ್ಯದಾದ್ಯಂತ ಪಸರಿಸಬೇಕು ಎಂಬ ಕಾರಣದಿಂದ ಧಾರವಾಡ, ಶಿವಮೊಗ್ಗ ಮತ್ತು ಗುಲ್ಬರ್ಗಕ್ಕೆ ರಂಗಾಯಣದ ಒಂದೊಂದು ಘಟಕವನ್ನು ಸರ್ಕಾರ ಮಂಜೂರು ಮಾಡಿದೆ. ಧಾರವಾಡ, ಶಿವಮೊಗ್ಗ ಘಟಕಕ್ಕೆ ನಿರ್ದೇಶಕರ ನೇಮಕಾತಿಯೂ ಆಗಿ ರಂಗ ಚಟುವಟಿಕೆಗಳು ಆರಂಭಗೊಂಡಿವೆ. ಆದರೆ, ಗುಲ್ಬರ್ಗ ರಂಗಾಯಣದ ವಿಚಾರ ಇನ್ನೂ ಕಡತದಲ್ಲೇ ಉಳಿದಿದೆ.
ಮೀಸಲಿರಿಸಿದ ರೂ 1ಕೋಟಿ ಅನುದಾನ ಖರ್ಚಾಗಿಲ್ಲ. ಇಲ್ಲಿನ ಘಟಕಕ್ಕೆ ನಿರ್ದೇಶಕರ ನೇಮಕಾತಿಗೆ ಸ್ವತಃ ರಂಗಭೂಮಿ ಹಿನ್ನೆಲೆಯಿಂದ ಬಂದ ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಇನ್ನೂ ಮನಸ್ಸು ಮಾಡಿಲ್ಲ. ರಂಗಾಯಣದ ನಿರ್ದೇಶಕರ ನೇಮಕಾತಿಗೆ ಸಚಿವೆ ಹಸಿರು ನಿಶಾನೆ ತೋರಿಸದಿರಲು ಕಾರಣ ಏನು?