ಚನ್ನಪಟ್ಟಣ: ‘ದೇಶದ ಪ್ರತಿಯೊಂದು ಮಗುವೂ ಹೆಮ್ಮೆಯ ಪ್ರಜೆಯಾಗಬೇಕು’ ಎಂದು ಕನ್ನಡಪರ ಹೋರಾಟಗಾರ ಸಿಂ.ಲಿಂ.ನಾಗರಾಜು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮುದಗೆರೆ ಗ್ರಾಮದ ನಿಸರ್ಗ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಬ್ದುಲ್ ಕಲಾಂ ಸ್ಮರಣೆ, ಮಕ್ಕಳ ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳಿಂದ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
‘ಭಾರತದ ಕ್ಷಿಪಣಿ ಜನಕ ಡಾ.ಅಬ್ದುಲ್ ಕಲಾಂ ಅವರಂತೆ ಜೀವನೋತ್ಸಾಹ ರೂಢಿಸಿಕೊಳ್ಳಬೇಕು. ನಮ್ಮ ನೆಲ, ಜನ, ಭಾಷೆ, ಸಂಸ್ಕೃತಿಯ ಸರ್ವತೋಮುಖ ಬೆಳವಣಿಗೆಗೆ ದುಡಿಯಬೇಕು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಪ್ರದರ್ಶಿಸಲು ಶಾಲೆಗಳು ವೇದಿಕೆ ಒದಗಿಸಿಕೊಡಬೇಕು’ ಎಂದು ಅವರು ತಿಳಿಸಿದರು.