ಬೇಗೂರು ಹೋಬಳಿ ಸುಭಾಷ್ನಗರದ ಕೆಲವು ರಸ್ತೆಗಳ ಮೇಲೆ ಚರಂಡಿನೀರು ಹರಿದು ದಾರಿಗಳೆಲ್ಲಾ ಹದಗೆಟ್ಟಿವೆ. ಮಳೆಗಾಲ ಆರಂಭವಾದರೆ ಸ್ಥಿತಿ ಇನ್ನೂ ಚಿಂತಾಜನಕವಾಗುತ್ತದೆ.
ರಸ್ತೆ ಡಾಂಬರೀಕರಣ ಮಾಡಿಸುವ ಜೊತೆಗೆ ಚರಂಡಿ ಹೂಳು ತೆಗೆದು ಸಮಸ್ಯೆ ಬಗೆಹರಿಸಬೇಕು. ಮಹಾನಗರ ಪಾಲಿಕೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೇ ನಿಯಮಿತವಾಗಿ ಕಸವನ್ನು ಸ್ವಚ್ಛ ಮಾಡುವ ಮೂಲಕ ನಾಗರಿಕರ ಹಿತ ಕಾಪಾಡಬೇಕು. –ಸ್ಥಳೀಯರು, ಸುಭಾಷ್ನಗರ