ಈ ಪ್ರಕರಣದಲ್ಲಿ ವಿಚಕ್ಷಣಾ ನ್ಯಾಯಾಲಯ ಪ್ರಕರಣದ ಗಂಭೀರತೆ ಪರಿಗಣಿಸದೆ ಕೇವಲ ಯಾಂತ್ರಿಕವಾಗಿ ನಿರ್ಧಾರ ಕೈಗೊಂಡಿದೆ ಎಂದಿರುವ ಹೈಕೋರ್ಟ್ ಈ ತೀರ್ಪಿಗೆ 2 ತಿಂಗಳ ತಡೆ ನೀಡಿತು.
ತ್ರಿಶ್ಶೂರ್ನಲ್ಲಿರುವ ವಿಚಾರಣಾ ಆಯುಕ್ತ ಮತ್ತು ವಿಶೇಷ ನ್ಯಾಯಾಧೀಶರು (ವಿಚಕ್ಷಣಾ ದಳ), ಚಾಂಡಿ ಮತ್ತು ಆರ್ಯಾಡನ್ ಮೊಹಮ್ಮದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜಾಗೃತ ದಳಕ್ಕೆ ಗುರುವಾರ ನಿರ್ದೇಶನ ನೀಡಿದ್ದರು.
ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ಎಸ್. ನಾಯರ್ ಅವರು ಬುಧವಾರ ನ್ಯಾಯಮೂರ್ತಿ ಶಿವರಾಜನ್ ಆಯೋಗದ ಮುಂದೆ ಹಾಜರಾಗಿ, ಮುಖ್ಯಮಂತ್ರಿ ಚಾಂಡಿ ಅವರ ನಿಕಟವರ್ತಿಗೆ ₹ 1.90 ಕೋಟಿ ಮತ್ತು ಸಚಿವ ಮೊಹಮ್ಮದ್ಗೆ ₹40 ಲಕ್ಷ ಲಂಚ ನೀಡಿದ್ದಾಗಿ ಹೇಳಿಕೆ ನೀಡಿದ್ದರು.