ಮೈಸೂರಿನ ಯುವ ಕಲಾವಿದ ಎಂ. ಹೇಮಂತ್ ಕುಮಾರ್ (35) ಮಧುಮೇಹ, ಕಿಡ್ನಿ, ಶ್ವಾಸಕೋಶದ ಸೋಂಕಿನಿಂದ ನರಳುತ್ತಿದ್ದು, ತುರ್ತು ನಿಗಾ ಘಟಕದಲ್ಲಿ ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಪ್ರತಿ ದಿನ ₨ 15 ಸಾವಿರ ಖರ್ಚಾಗುತ್ತಿದೆ. ಅವರಿಗೆ ಇನ್ನೂ ನಾಲ್ಕು ವಾರ ಚಿಕಿತ್ಸೆ ಅಗತ್ಯವಿದ್ದು, ಅಂದಾಜು ₨ 5 ಲಕ್ಷ ಖರ್ಚಾಗುವ ನಿರೀಕ್ಷೆ ಇದೆ.
ಆರ್ಥಿಕವಾಗಿ ತೀರಾ ದುರ್ಬಲರಾದ ಅವರ ಕುಟುಂಬಕ್ಕೆ ಈ ದೊಡ್ಡ ಮೊತ್ತ ಭರಿಸುವುದು ಕಷ್ಟ. ದಾನಿಗಳು ನೆರವು ನೀಡಬೇಕೆಂದು ಕೋರಿಕೆ.
ಉಳಿತಾಯ ಖಾತೆ ಸಂಖ್ಯೆ 0788101060565, ಐಎಫ್ಎಸ್ಸಿ ಕೋಡ್–ಸಿಎನ್ಆರ್ಬಿ 0000876, ಕೆನರಾಬ್ಯಾಂಕ್, ಸರಸ್ವತಿಪುರಂ ಶಾಖೆ, ಮೈಸೂರು–09 ಮೊ: 9844408231