ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡ ತನ್ನ ಸವಾಲು ಒಡ್ಡಿದೆ. ಭಾರತ ಇಲ್ಲಿ ‘ಎ’ ಗುಂಪಿನಲ್ಲಿದೆ. ತನ್ನ ಗುಂಪಿನಲ್ಲಿ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ವೇಲ್ಸ್, ಸ್ಕಾಟ್ಲೆಂಡ್ ತಂಡಗಳನ್ನು ಎದುರಿಸುತ್ತಿದೆ.
ಹಿಂದಿನ ಕೂಟಗಳಲ್ಲಿ ಇದ್ದಂತೆ ಈ ಸಲ ಕೂಡಾ ಭಾರತಕ್ಕೆ ಆಸ್ಟ್ರೇಲಿಯದ ಸವಾಲು ದೊಡ್ಡದಾಗಿಯೇ ಇದೆ. ವೇಲ್ಸ್ ತಂಡವನ್ನು ಮಣಿಸಿ ಶುಭಾರಂಭ ಮಾಡಿರುವ ಭಾರತಕ್ಕೆ ಚಿನ್ನದ ಪದಕ ಗೆಲ್ಲಬೇಕಾದರೆ ಕಠಿಣ ಪರಿಶ್ರಮ ನಡೆಸುವುದು ಅಗತ್ಯ.
2010ರ ಕಾಮನ್ವೆಲ್ತ್ ಕೂಟದ ಫೈನಲ್ನಲ್ಲಿ ಭಾರತ ತಂಡ ಆಸ್ಟ್ರೇಲಿಯ ಎದುರು ಹೀನಾಯ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಪ್ರಸಕ್ತ ಭಾರತ ತಂಡದಲ್ಲಿ ಕರ್ನಾಟಕದ ವಿ.ಆರ್.ರಘುನಾಥ್, ಎಸ್.ವಿ.ಸುನಿಲ್, ನಿಖಿನ್ ತಿಮ್ಮಯ್ಯ ಆಡುತ್ತಿದ್ದಾರೆ.