ನವದೆಹಲಿ (ಪಿಟಿಐ): ಚಿನ್ನದ ಆಮದು ನಿಯಂತ್ರಿಸಲು ಮತ್ತು ಭೌತಿಕ ಸ್ವರೂಪದಲ್ಲಿರುವ ಚಿನ್ನವನ್ನು ನಗದಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಿಕೊಡಲು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮೂರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೆ, ಚಿನ್ನದ ನಾಣ್ಯದ ಬೇಡಿಕೆ ಪೂರೈಸಲು ಅಶೋಕ ಚಕ್ರ ಚಿತ್ರ ಹೊಂದಿರುವ ಭಾರತೀಯ ಚಿನ್ನದ ನಾಣ್ಯ (ಇಂಡಿಯನ್ ಗೋಲ್ಡ್ ಕಾಯಿನ್) ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ.