ಗಡಿ ಸಮಸ್ಯೆ ಬಗ್ಗೆ ಉಭಯ ದೇಶಗಳು ಮಾತುಕತೆ ನಡೆಸುತ್ತಿದ್ದರು ಚೀನಾ ಸೇನಾ ತುಕಡಿಗಳನ್ನು ಭಾರತದತ್ತ ಕಳುಹಿಸುತ್ತಿದೆ.
ಚುಮಾರ್ನಲ್ಲಿ ಭಾರತೀಯ ರೈತ ಕಾರ್ಮಿಕರು ನೀರಾವರಿಗಾಗಿ ಕಾಲುವೆ ನಿರ್ಮಿಸುತ್ತಿರುವುದಕ್ಕೆ ಚೀನಾ ಆಕ್ಷೇಪವೆತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಚುಮಾರ್ಗೆ ಚೀನಾವು ಬುಧವಾರ ಬೆಳಗ್ಗೆಯಿಂದ ಸುಮಾರು 500ಮಂದಿ ಸೈನಿಕರನ್ನು ರವಾನಿಸಿದೆ. ಅಷ್ಟೇ ಸಂಖ್ಯೆಯ ಭಾರತೀಯ ಸೈನಿಕರು ಆ ಭಾಗದಲ್ಲಿ ಬೀಡುಬಿಟ್ಟಿದ್ದಾರೆ. ಗಡಿಯಲ್ಲಿ ಎರಡು ಸೇನೆಗಳು ಕನಿಷ್ಠ 200ಮೀಟರ್ಗಳಷ್ಟು ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ಭಾರತದ ಒತ್ತಾಸೆಯಾಗಿದೆ.