ಚೆನ್ನೈ (ಪಿಟಿಐ): ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಯಲ್ಲಿ ಆಡಲಿರುವ ಚೆನ್ನೈಯಿನ್ ತಂಡದ ಪರ ಆಡಲು ನಲ್ಲಪ್ಪನ್ ಮೋಹನ್ ರಾಜ್ ಮತ್ತು ಧನಪಾಲ್ ಗಣೇಶ್ ಅವರು ಸಹಿ ಹಾಕಿದ್ದಾರೆ.
ಮೋಹನ್ ರಾಜ್ ಅವರು ಮೊದಲ ಎರಡು ಆವೃತ್ತಿಗಳಲ್ಲಿ ಅಟ್ಲೆಟಿಕೊ ಡಿ ಕೋಲ್ಕತ್ತ ತಂಡದಲ್ಲಿ ಆಡಿದ್ದರು. 2014ರ ಟೂರ್ನಿಯಲ್ಲಿ ತಂಡ ಚಾಂಪಿಯನ್ ಆಗಿತ್ತು. ಕೋಲ್ಕತ್ತ ಜೊತೆಗಿನ ಒಪ್ಪಂದ ಮುಗಿದ ಬಳಿಕ ಅವರು ಇಲ್ಲಿನ ತಂಡ ಸೇರಿಕೊಂಡಿದ್ದಾರೆ.
ಗಣೇಶ್ ಹೋದ ವರ್ಷ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಸೆಪ್ಟೆಂಬರ್ನಲ್ಲಿ ನಡೆದ ಟೂರ್ನಿಯ ವೇಳೆ ಗಾಯಗೊಂಡಿದ್ದರಿಂದ ಅವರು ಐಎಸ್ಎಲ್ ಟೂರ್ನಿಯಲ್ಲಿ ಆಡಿರಲಿಲ್ಲ. ಅವರು ಉತ್ತಮ ಆಟಗಾರರಾಗಿದ್ದು ತಂಡಕ್ಕೆ ಮಹತ್ವದ ಕಾಣಿಕೆ ನೀಡಿದ್ದಾರೆ.