ರಾಷ್ಟ್ರಕವಿ ಆಯ್ಕೆಗೆ ಜನಾಭಿಪ್ರಾಯ ಕ್ರೋಡೀಕರಿಸಿ ನಿರ್ಣಯ ಮಾಡುವ ಉದ್ದೇಶ ಹಾಸ್ಯಾಸ್ಪದ. ಹೀಗೆ ಮಾಡಿದಲ್ಲಿ ಸಾಹಿತ್ಯದ ಗಂಧಗಾಳಿ ತಿಳಿಯದವರೂ ಆಯ್ಕೆಯಾಗುವ ಸಂಭವ ಇರುತ್ತದೆ. ಯಾವುದೇ ವ್ಯಕ್ತಿ ಯಾವುದೇ ಸ್ಥಾನಕ್ಕೆ ಆಯ್ಕೆಯಾದರೂ, ಆತ ಆ ಪದವಿಗೆ ಸೂಕ್ತ, ಅರ್ಹ ಎನಿಸುವಂತಿರಬೇಕು. ಹಾಗೊಂದು ವೇಳೆ ಅರ್ಹರು ಸಿಗದೇ ಇದ್ದಲ್ಲಿ ಯಾರನ್ನೂ ಆಯ್ಕೆ ಮಾಡದೆ ಸುಮ್ಮನಿರುವುದೇ ಒಳ್ಳೆಯದು.