ಬೆಂಗಳೂರು: ಅತಿವೃಷ್ಟಿ ಮತ್ತು ಭೀಕರ ಪ್ರವಾಹದಿಂದ ತತ್ತರಿಸಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸರ್ಕಾರವು ಐವರ ವೈದ್ಯರ ತಂಡವನ್ನು ಗುರುವಾರ ಕಳುಹಿಸಿದೆ.
ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್, ‘ಪ್ರವಾಹದ ನಂತರ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರಕ್ಕೆ 17 ವೈದ್ಯರನ್ನು ಕಳುಹಿಸಲು ನಿರ್ಧರಿಸಲಾಗಿದೆ. ಐವರ ವೈದ್ಯರ ತಂಡ, ಅಗತ್ಯ ಔಷಧಗಳೊಂದಿಗೆ ಅಲ್ಲಿಗೆ ಪ್ರಯಾಣ ಬೆಳೆಸಿದೆ. ಅಲ್ಲಿರುವ ಪರಿಸ್ಥಿತಿಯನ್ನು ವೈದ್ಯರ ತಂಡ ಅವಲೋಕಿಸಲಿದ್ದು, ನಂತರ ಉಳಿದ ವೈದ್ಯರನ್ನು ಕಳುಹಿಸಲಾಗುವುದು. ಎಲ್ಲ ರೀತುಯ ಜವಾಬ್ದಾರಿ ಹೊರಲು ಸಿದ್ಧ ’ ಎಂದರು.