ಬೆಂಗಳೂರು: ತಮಿಳುನಾಡು ಮುಖ್ಯ-ಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಂತಿಮ ಆದೇಶವನ್ನು ಸೆ.27ರಂದು ಪರಪ್ಪನ ಅಗ್ರಹಾರ ವಿಶೇಷ ನ್ಯಾಯಾಲಯ-ದಲ್ಲೇ ಪ್ರಕಟಿಸುವಂತೆ ನಗರ ಸಿವಿಲ್ ನ್ಯಾಯಾಲಯವು ಮಂಗಳವಾರ ಸೂಚಿಸಿದೆ.
ತಮಗೆ ಎಲ್ಟಿಟಿಇ ಹಾಗೂ ಕೇರಳದ ಕೆಲ ಸಂಘಟನೆಗಳಿಂದ ಜೀವ ಬೆದರಿಕೆ ಇದೆ. ಹೀಗಾಗಿ ಹೆಚ್ಚಿನ ಜನಸಂದಣಿ ಇರುವ ಬೆಂಗಳೂರು ಸಿವಿಲ್ ನ್ಯಾಯಾಲಯಗಳ ಕಟ್ಟಡಕ್ಕೆ ಭದ್ರತೆಯೊಂದಿಗೆ ಬರುವುದು ಕಷ್ಟ-ವಾಗು-ತ್ತದೆ. ಆದ್ದರಿಂದ ನಗರದ ಹೊರ ವಲಯದಲ್ಲಿರುವ ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯ-ದಲ್ಲೇ ಆದೇಶ ಪ್ರಕಟಿಸಬೇಕೆಂದು ಜಯಲಲಿತಾ ಅವರು ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಯಲಲಿತಾ ಅವರಿಗೆ ಪೊಲೀಸ್ ಭದ್ರತೆ ಒದಗಿಸುವ ಬಗ್ಗೆ ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಅವರಿಂದ ಮಾಹಿತಿ ಕೇಳಿದ್ದರು.
ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ರೆಡ್ಡಿ ಅವರು, ‘ಭದ್ರತೆ ದೃಷ್ಟಿಯಿಂದ ಆದೇಶವನ್ನು ಪರಪ್ಪನ ಅಗ್ರಹಾರದ ನ್ಯಾಯಾಲಯಕ್ಕೆ ವರ್ಗಾ-ವಣೆ ಮಾಡುವುದು ಸೂಕ್ತ’ ಎಂದು ಮಾಹಿತಿ ನೀಡಿದರು. ಹೀಗಾಗಿ ಆ ನ್ಯಾಯಾಲಯದಲ್ಲೇ ಆದೇಶ ಪ್ರಕಟಿಸು-ವುದಾಗಿ ನ್ಯಾಯಾಧೀಶರು ಸೂಚಿಸಿದರು.
ಮೊದಲು ಸಿಟಿ ಸಿವಿಲ್ ನ್ಯಾಯಾಲಯದಲ್ಲೇ ಅಂತಿಮ ಆದೇಶ ಪ್ರಕಟಿಸಲು ಸೆ.20ರಂದು ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ, ಈಗ ಆದೇಶ ಮತ್ತೊಂದು ನ್ಯಾಯಾಲಯ-ದಲ್ಲಿ ಪ್ರಕಟವಾಗುವುದರಿಂದ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆ-ಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಾಗುವುದ-ರಿಂದ ಆದೇಶದ ದಿನಾಂಕವನ್ನು ಸೆ.27ಕ್ಕೆ ಮುಂದೂಡಲಾಗಿದೆ.
ಆ ದಿನ ಪ್ರಕರಣದ ಎಲ್ಲ ಆರೋಪಿಗಳು ಹಾಜರಿರಬೇಕು ಎಂದು ನ್ಯಾಯಾಲಯವು ನಿರ್ದೇಶನ ನೀಡಿದೆ.