ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಲಿಯ ಪೈಪುಗಳು

Last Updated 8 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬಸವನಗುಡಿ ಮಲ್ಲಿಕಾರ್ಜುನಸ್ವಾಮಿ ರಸ್ತೆಯಲ್ಲಿರುವ ಕಾವೇರಿ ನೀರು ಸರಬರಾಜು ಟ್ಯಾಂಕಿನ ದೊಡ್ಡ ದೊಡ್ಡ ಪೈಪುಗಳನ್ನು ಹಲವಾರು ವರ್ಷಗಳಿಂದ ಪಾದಚಾರಿಗಳು ಓಡಾಡುವ ಜಾಗದಲ್ಲಿ ಹಾಕಿರುತ್ತಾರೆ. ಈ ಪೈಪುಗಳು ತುಕ್ಕುಹಿಡಿದು ತುಂಬಾ ಗಲೀಜಾಗಿರುತ್ತವೆ.

ಹೆಗ್ಗಣ, ಹಾವುಗಳು ಇದರಲ್ಲಿ ವಾಸವಾಗಿದ್ದು, ಓಡಾಡುವುದೇ ಕಷ್ಟ. ಸಮೀಪದಲ್ಲಿಯೇ ಆಚಾರ್ಯ ಪಾಠಶಾಲೆ ಇದ್ದು, ಶಾಲೆಯ ಮಕ್ಕಳು, ಪೋಷಕರಿಗೆ ಇದರಿಂದಾಗಿ ತುಂಬಾ ತೊಂದರೆಯುಂಟಾಗುತ್ತಿದೆ. ಜಲಮಂಡಲಿಯ ನೀರು ಸರಬರಾಜು ಕೇಂದ್ರದಲ್ಲಿ ಬಹಳಷ್ಟು ಜಾಗವಿದ್ದರೂ ಈ ರೀತಿ ಈ ಪೈಪುಗಳನ್ನು ಫುಟ್‌ಪಾತ್‌ ಮೇಲೆ ಹಾಕಿರುವುದು ಖಂಡನೀಯ. ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಈ ಪೈಪುಗಳನ್ನು ಸ್ಥಳಾಂತರಿಸಬೇಕಾಗಿ ಕೋರುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT