ಬೆಂಗಳೂರು: ‘ಯಾವುದೇ ಕ್ಷೇಮಾಭಿವೃದ್ಧಿ ಸಂಸ್ಥೆಯು ಜ್ಞಾನಾರ್ಜನೆಗಾಗಿ ಆರ್ಥಿಕ ನೆರವನ್ನು ಜಾತ್ಯತೀತವಾಗಿ ನೀಡಿದರೆ ಆ ಪ್ರದೇಶದ ಜನರ ಏಳಿಗೆಗಾಗಿ ಸಹಾಯಕವಾಗುತ್ತದೆ’ ಎಂದು ವಿದ್ವಾನ್ ಪಾವಗಡ ಪ್ರಕಾಶ್ರಾವ್ ಹೇಳಿದರು.
ಪಾವಗಡ ತಾಲ್ಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯು ನಗರದ ಕರ್ನಾಟಕ ಜೈನ ಭವನದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಥೆ ಸಂಸ್ಥಾಪಕ ಪಾ. ನರಸಿಂಹಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.