ಶಿಕ್ಷಕರ ನೌಕರಿಗಾಗಿ ಕಾಯುತ್ತಿರುವ ಡಿ.ಇಡಿ ವಿದ್ಯಾರ್ಥಿಗಳು ಇಂದು ಅತಂತ್ರ ಸ್ಥಿತಿಗೆ ಸಿಲುಕಿ ಒದ್ದಾಡುವ ಪರಿಸ್ಥಿತಿಯನ್ನು ತಂದಿಟ್ಟಿದೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ).
ಪರೀಕ್ಷೆಗೆ ಅರ್ಜಿಯನ್ನು ಆಹ್ವಾನಿಸಿದ ದಿನದಿಂದ ಫಲಿತಾಂಶದವರೆಗೂ ಎಲ್ಲವೂ ಗೊಂದಲಮಯ. ಸಂಬಂಧಪಟ್ಟ ಇಲಾಖೆಗೇ ಸರಿಯಾದ ಉತ್ತರಗಳು ಗೊತ್ತಿಲ್ಲ, ಇದೆಂಥ ಸ್ಥಿತಿ? ಅರ್ಹತೆಗೆ ಒಂದೇ ಒಂದು ಅಂಕದಿಂದ ವಂಚಿತರಾಗಿರುವವರು ಅದೆಷ್ಟು ವಿದ್ಯಾರ್ಥಿಗಳೋ? ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅರ್ಹತೆಗೆ ಒಂದು ಅಂಕದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಅರ್ಹತೆ ನೀಡಿ, ಮುಂದಿನ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಿ.