ನಿರೀಕ್ಷಿಸಲಾಗದಷ್ಟು ಪ್ರಮಾಣದಲ್ಲಿ ಟಿಇಟಿ ಫಲಿತಾಂಶದಲ್ಲಿ ಕುಸಿತಕಂಡಿದ್ದು, ಒಂದೆಡೆ ಶಿಕ್ಷಕರ ಆಯ್ಕೆಗೆ ಅರ್ಹತೆ ಪಡೆದವರ ಕೊರತೆ, ಎಂಟತ್ತು ವರ್ಷಗಳಿಂದ ಕಾದು ಕುಳಿತು ವಯಸ್ಸು ಮೀರುತ್ತಿರುವ ಅಭ್ಯರ್ಥಿಗಳಿಗೆ ಒಂದೆರಡು ಅಂಕಗಳಲ್ಲಿ ಅರ್ಹತೆ ಕೈತಪ್ಪಿ ಶಿಕ್ಷಕ ಹುದ್ದೆ ಕೈತಪ್ಪಿಹೋಗಬಹುದಾದ ಪರಿಸ್ಥಿತಿ ಒದಗಿದೆ.
ರಾಜ್ಯದಲ್ಲಿ ಮೊದಲಬಾರಿ ಪರೀಕ್ಷೆ ನಡೆದಿದ್ದು ಮತ್ತು ತಯಾರಿಗೆ ಸೂಕ್ತ ಮಾಹಿತಿ, ಸಮಯಾವಕಾಶದ ಕೊರತೆ ಇದ್ದದ್ದು ಫಲಿತಾಂಶ ಕುಸಿತಕ್ಕೆ ಕಾರಣ. ಆದ್ದರಿಂದ ಅಭ್ಯರ್ಥಿಗಳಿಗೆ ಎರಡೂ ಪತ್ರಿಕೆಗಳನ್ನು ಇನ್ನೊಂದು ಪರೀಕ್ಷೆ ಮೂಲಕ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು.