ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಕ್ವಾಂಡೊ: ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರಶಸ್ತಿ

Last Updated 27 ಜುಲೈ 2016, 10:07 IST
ಅಕ್ಷರ ಗಾತ್ರ

ರಾಮನಗರ: ಮಂಡ್ಯದ ಪಿಇಎಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಈಚೆಗೆ ನಡೆದ 34ನೇ ರಾಜ್ಯ ಮಟ್ಟದ ಟೇಕ್ವಾಂಡೊ ಸಬ್‌ ಜೂನಿಯರ್‌, ಜೂನಿಯರ್‌ ಹಾಗೂ ಕೆಡೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆಯ ಸ್ಪರ್ಧಿಗಳು ಉತ್ತಮ ಸಾಧನೆ ತೋರಿದ್ದು, ಒಂದು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

29ಕೆ.ಜಿ. ಸಬ್ ಜೂನಿಯರ್ ವಿಭಾಗದಲ್ಲಿ ಜೆ.ಬಿ.ಭರತ್‌ರಾಜ್‌ ಗೌಡ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದರು.

59ಕೆ.ಜಿ. ಜೂನಿಯರ್ ವಿಭಾಗದಲ್ಲಿ ಎಂ.ಎನ್.ಪೂರ್ಣಚಂದ್ರ ಕೀರ್ತಿ ಬೆಳ್ಳಿ ಪದಕ, 45ಕೆ.ಜಿ ಕೆಡೆಟ್ ವಿಭಾಗದಲ್ಲಿ ಜಿ.ಪ್ರಶಾಂತ್ ಬೆಳ್ಳಿ ಪದಕ, 21ಕೆ.ಜಿ. ಸಬ್‌ಜೂನಿಯರ್‌ ವಿಭಾಗದಲ್ಲಿ ಕಿಶೋರ್ ಎಸ್.ಚವಣ್, 25ಕೆ.ಜಿ. ವಿಭಾಗದಲ್ಲಿ ಆರ್.ಎಸ್.ಹಿಮವಂತ ಗೌಡ ಮತ್ತು 27ಕೆ.ಜಿ. ವಿಭಾಗದಲ್ಲಿ ಎನ್.ಎಂ. ದೀಕ್ಷಿತ್ ಕಂಚಿನ ಪದಕ, ಹಾಗೂ 44ಕೆ.ಜಿ.ಮಹಿಳಾ ಕೆಡೆಟ್‌ ವಿಭಾಗದಲ್ಲಿ ಕವನಶ್ರೀ ಕಂಚಿನ ಪದಕ ತಮ್ಮದಾಗಿಸಿಕೊಂಡರು ರಾಮನಗರ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ಪ್ರಧಾನ ಕಾರ್ಯದರ್ಶಿ ಗೋವಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT