ಮುಂಬೈ (ಪಿಟಿಐ): ಶಿವಸೇನೆ ಮುಖ್ಯಸ್ಥ ದಿ.ಬಾಳಾ ಸಾಹೇಬ್ ಠಾಕ್ರೆ ಉಯಿಲಿಗೆ ಸಂಬಂಧಿಸಿ ಅವರ ಮಗ ಜೈದೇವ್ ಠಾಕ್ರೆ ಅವರಿಗೆ ಮಧ್ಯಾಂತರ ಪರಿಹಾರ ನೀಡಲು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಉಯಿಲಿನ ಫಲಾನುಭವಿಗಳು ಕುಟುಂಬದ ಆಸ್ತಿ ಮಾರಾಟ ಅಥವಾ ವಿಲೇವಾರಿ ಮಾಡುವುದನ್ನು ತಡೆಯಬೇಕೆಂದು ಕೋರಿ ಜೈದೇವ್ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಶಿವಸೇನೆಯ ಕಾರ್ಯಕಾರಿ ಅಧ್ಯಕ್ಷ ಉದ್ಧವ್ ಠಾಕ್ರೆ ಕೂಡ ಫಲಾನುಭವಿಗಳಲ್ಲಿ ಒಬ್ಬರು.
‘ಭಾರತೀಯ ಉತ್ತರಾಧಿಕಾರ ಕಾಯ್ದೆ ಪ್ರಕಾರ ಈ ವಿಷಯದಲ್ಲಿ ಮಧ್ಯಾಂತರ ಪರಿಹಾರ ನೀಡುವ ಅಧಿಕಾರ ಕೋರ್ಟ್ಗೆ ಇಲ್ಲ’ ಎಂದು ನ್ಯಾಯಮೂರ್ತಿ ಆರ್.ಡಿ.ಧನುಕಾ ಹೇಳಿದರು.