ಡಬ್ಬಿಂಗ್ಗೆ ಅಘೋಷಿತ ನಿಷೇಧ ಹೇರುವ ಮೂಲಕ ಸ್ವಹಿತಾಸಕ್ತಿಯ ಕೆಲವರು ದಶಕಗಳಿಂದ ಕನ್ನಡಿಗರ ಹಕ್ಕನ್ನೇ ಕಸಿದಿದ್ದರು. ಸ್ವಾರ್ಥ ಸಾಧನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೂ ಬಳಸಿಕೊಂಡಿದ್ದರು. ಅಂಥ ಶಕ್ತಿಗಳಿಗೆ ಭಾರತೀಯ ಸ್ಪರ್ಧಾ ಆಯೋಗ ಈಗ ಮಂಗಳಾರತಿ ಎತ್ತಿರುವುದು ಸರಿಯಾಗಿಯೇ ಇದೆ.
ಶಂಕರ್ ನಾಗ್ ಅವರ ‘ಮಾಲ್ಗುಡಿ ಡೇಸ್’ ಧಾರಾವಾಹಿ, ಅಮೀರ್ ಖಾನ್ ಅವರ ‘ಸತ್ಯಮೇವ ಜಯತೆ’ ಕಾರ್ಯಕ್ರಮ, ‘ರಾಮಾಯಣ’, ‘ಮಹಾಭಾರತ’ ಧಾರಾವಾಹಿಗಳನ್ನು, ನ್ಯಾಷನಲ್ ಜಿಯಾಗ್ರಫಿಕ್, ಡಿಸ್ಕವರಿ ವಾಹಿನಿಗಳನ್ನು, ಉತ್ತಮ ಗುಣಮಟ್ಟದ ಶ್ರೇಷ್ಠ ಚಿತ್ರಗಳನ್ನು ಕನ್ನಡದಲ್ಲೇ ವೀಕ್ಷಿಸುವ ಅನುಕೂಲ ಶೀಘ್ರ ದೊರೆಯಲಿ. ಭಾರತೀಯ ಸ್ಪರ್ಧಾ ಆಯೋಗದ ತೀರ್ಪಿಗೆ ಸ್ವಾಗತ.