ನವದೆಹಲಿ (ಪಿಟಿಐ): ‘ತಂಬಾಕಿಗೆ ವಿದಾಯ ಹೇಳುವ ಮೂಲಕ ಆರೋಗ್ಯಕರ ಭಾರತಕ್ಕೆ ಬುನಾದಿ ಹಾಕಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕರೆ ನೀಡಿದ್ದಾರೆ.
‘ತಂಬಾಕು ಸೇವನೆಯ ಅಪಾಯಗಳ ಬಗ್ಗೆ ಜಾಗೃತಿ ಹಾಗೂ ಭಾರತದಲ್ಲಿ ತಂಬಾಕು ಸೇವನೆ ತಗ್ಗಿಸಲು ಯತ್ನಿಸಲು ವಿಶ್ವ ತಂಬಾಕು ರಹಿತ ದಿನದಂದು ಪ್ರತಿಜ್ಞೆ ಮಾಡಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ತಂಬಾಕು ಕೇವಲ ಸೇವಿಸುವವರ ಮೇಲೆ ಮಾತ್ರವಲ್ಲ ಸುತ್ತಲಿನ ಜನರ ಮೇಲೂ ಪರಿಣಾಮ ಬೀರುತ್ತದೆ. ತಂಬಾಕಿಗೆ ವಿದಾಯ ಹೇಳುವ ಮೂಲಕ ಆರೋಗ್ಯಕರ ಭಾರತದ ಬುನಾದಿ ಹಾಕಿ’ ಎಂದೂ ಅವರು ಮನವಿ ಮಾಡಿದ್ದಾರೆ.